top of page
Search

ಯೋಧ ವಂದನೆ - Article Series published in Karadavani Monthly Magazine


ಕ್ಯಾಪ್ಟನ್ ಬಿ.ಚಂದ್ರಶೇಖರ , 8/6/1960



ಮನೆ/ಮನೆತನ : 

ಬಳಕ್ಕ

ಹೆತ್ತವರ ವಿವರ : 

ದಿ.ಬಳಕ್ಕ ಗೋವಿಂದ ಭಟ್ ಮತ್ತು ದಿ.ಗಂಗಮ್ಮ

ಪರಿವಾರದ ವಿವರ :

ಪತ್ನಿ ಶ್ರೀಮತಿ ಮಮತಾ, ಮಗಳು ಅನ್ವಿತಾ, ಮಗ ಅನಿರುದ್ಧ್

ಸೇವಾ ಅವಧಿ : 

33 ವರ್ಷ, 4 ತಿಂಗಳ ಸುದೀರ್ಘ ಸೇವೆ

ಸೇವೆ ಸಲ್ಲಿಸಿದ ವಿಭಾಗ :

ಭಾರತೀಯ ಸೇನಾ ಹಡಗುಗಳಾದ ಐ ಎನ್ ಎಸ್ ತಾರಗಿರಿ , ಐ ಎನ್ ಎಸ್ ದುನಗಿರಿ, ಐ ಎನ್ ಎಸ್ ಚಟಕ್,

ಐ ಎನ್ ಎಸ್ ಗೋದಾವರಿ, ಐ ಎನ್ ಎಸ್ ದೀಪಕ್ ಮತ್ತು ಐ ಎನ್ ಎಸ್ ಶಕ್ತಿ ಇತ್ಯಾದಿಗಳಲ್ಲಿ ಸುದೀರ್ಘ ಸೇವೆ.

ಪ್ರಶಸ್ತಿ/ಗೌರವ :

ಸೈನ್ಯ ಸೇವಾ ಪದಕ

ಅವಿಸ್ಮರಣೀಯ ಅನುಭವ :

1998 ರಲ್ಲಿ ಓಖಾ ಎಂಬಲ್ಲಿ ಪಾಕಿಸ್ತಾನದ ಹಡಗಿನೊಡನೆ ನಡೆದ ಸೆಣಸಾಟ,ಅಬುದಾಬಿ, ಬಂದರ್

ಅಬ್ಬಾಸ್(ಇರಾನ್), ಕತ್ತಾರ್,ಸಿಂಗಾಪುರ್ ದೇಶಗಳಿಗೆ ಹಡಗಿನಲ್ಲಿ ಸೇವಾ ತರಬೇತಿಯ ಸಂದರ್ಭದಲ್ಲಿ ಮಾಡಿದ ಭೇಟಿ, ಸೇವಾ

ನಿವೃತ್ತಿಯ ಸಂದರ್ಭದಲ್ಲಿ ಸಹೋದ್ಯೋಗಿಗಳು ಕೊಟ್ಟ ಬೀಳ್ಕೊಡುಗೆ ಸಮಾರಂಭ, 2001-02 ರಲ್ಲಿ ಭಾರತ ಪಾಕಿಸ್ತಾನದ ಮಧ್ಯೆ

ಏರ್ಪಟ್ಟ ’ಸ್ಟಾಂಡ್ ಆಫ್’ ಘಟನೆಯ ಸಂದರ್ಭ ನಮ್ಮ ಹಡಗು ’ಐಎನ್‍ಎಸ್ ಶಕ್ತಿಯನ್ನು ಗುರುತು ಮರೆಸಿ ರಕ್ಷಿಸಿದ್ದು.

ಪ್ರೇರಣೆ : 

ಮನೆಯಲ್ಲಿದ್ದ ದೇಶಭಕ್ತಿಯ ವಾತಾವರಣ ಹಾಗೂ ಕಲ್ಲಿಕೋಟೆಯ ಕಾಲೇಜು ಸ್ನೇಹಿತರ ಪ್ರೋತ್ಸಾಹ.

ಸಮಾಜಕ್ಕೆ ಸಂದೇಶ : 

: ಸೇವಾ ಅವಧಿಯಲ್ಲಿ ನಮ್ಮ ನೈಪುಣ್ಯ ವೃದ್ಧಿಸುವ ತರಬೇತಿ ನೀಡಲಾಗುತ್ತದೆ. ಬದುಕಿನ ವಿವಿಧ ಹಿನ್ನೆಲೆಯಿಂದ

ಬಂದ ಅನೇಕ ವ್ಯಕ್ತಿಗಳ ಜೊತೆ ಬೆರೆಯುವ , ದೇಶದ ಅನೇಕ ನಗರಗಳ ಬದುಕಿಗೆ ಹೊಂದಿಕೊಂಡು ಹೋಗುವ ವಿಶಿಷ್ಟ ಅನುಭವ ಪಡೆಯುತ್ತೇವೆ. ಉನ್ನತ ಶಿಕ್ಷಣ, ಸಂಶೋಧನೆ ಇತ್ಯಾದಿಗಳ ಜೊತೆಗೆ ನಮ್ಮ ನೇತೃತ್ವ ಶಕ್ತಿಯನ್ನು ಹೆಚ್ಚಿಸುವ ಅನೇಕ ಅವಕಾಶಗಳನ್ನು

ಸೇನಾ ವೃತ್ತಿ ಒದಗಿಸಿ ಕೊಡುತ್ತದೆ. ಇಷ್ಟೇ ಅಲ್ಲದೆ ಕುಟುಂಬದವರಿಗೂ ವಿವಿಧ ಅವಕಾಶಗಳನ್ನೊದಗಿಸುತ್ತದೆ.

ಸಂಪರ್ಕ ಸಂಖ್ಯೆ :

 9757231607




37 views0 comments
bottom of page